‘ಮರುದಿನ ಬೆಳಿಗ್ಗೆ ಮಾತು ಬದಲಿಸಿದ ಆತ, ಮದುವೆ ಆಗುವುದಿಲ್ಲವೆಂದು ಗಲಾಟೆ ಶುರು ಮಾಡಿದ. ಕಾರಿನಲ್ಲೇ ನಮ್ಮಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಮನಸೋಇಚ್ಛೆ ಹಲ್ಲೆ ನಡೆಸಿ ಹೊರಟು ಹೋದ. ಗಾಯಗೊಂಡ ನಾನು, ಚಿಕಿತ್ಸೆ ಪಡೆಯಲು ಮುಂಬೈಗೆ ಹೋಗಿದ್ದೆ. ಹೀಗಾಗಿ, ದೂರು ಕೊಡುವುದು ತಡವಾಯಿತು’ ಎಂದು ಸಂತ್ರಸ್ತೆ ಹೇಳಿದ್ದಾರೆ.