ಮೂಡಲಪಾಳ್ಯದ ಶಿವಾನಂದನಗರ 6ನೇ ಅಡ್ಡರಸ್ತೆಯಲ್ಲಿ ಆರೋಪಿ ಶಿವಕುಮಾರ್, ಬೃಹತ್ ಜಾಹೀರಾತು ಫಲಕ ಅಳವಡಿಸಿದ್ದರು. ಅಣ್ಣಾರಾಯ ಸಹ ಗೆದ್ದಲಹಳ್ಳಿಯ ಜಿ.ಎಂ.ಆರ್ ಬಡಾವಣೆಯ 3ನೇ ಮುಖ್ಯರಸ್ತೆಯಲ್ಲಿ ಫಲಕ ಹಾಕಿದ್ದರು. ಜತೆಗೆ, ಹುಚ್ಚಪ್ಪ ಮತ್ತು ಮಲ್ಲಪ್ಪ, ಮೂಡಲಪಾಳ್ಯದ ನಾಗರಬಾವಿ ಮುಖ್ಯರಸ್ತೆಯಲ್ಲಿ ಫಲಕಗಳನ್ನು ಅಳವಡಿಸಿ ನಗರದ ಸೌಂದರ್ಯವನ್ನು ವಿರೂಪಗೊಳಿಸಿದ್ದರು.