‘ಈಚೆಗೆ ವಿಧಿವಶರಾದ ಶಿರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ ಹಿಂದೆ ಆರೋಪಿಸಿದ್ದರು. ಅವರ ಶಿಷ್ಯರು ಈಗ ಮುಂದುವರಿಸಿದ್ದಾರೆ. ಸುಮ್ಮನಿದ್ದರೆ ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ ಆಗುತ್ತದೆ. ಹೀಗಾಗಿ, ನಾವು ಶ್ರೀಗಳ ಪರವಾಗಿ ದನಿ ಎತ್ತುತ್ತಿದ್ದೇವೆ. ಆರೋಪ ಮಾಡುತ್ತಿರುವವರನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತನಿಖೆಗೆ ಒಳಪಡಿಸಬೇಕು. ಸಾಬೀತುಪಡಿಸದಿದ್ದಲ್ಲಿ, ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.