‘ನ್ಯಾಯಾಲಯದಲ್ಲಿ ನಡೆಯು ತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಗಳು ನಿಗದಿತ ದಿನಾಂಕದಂದು ಕಡ್ಡಾಯವಾಗಿ ಖುದ್ದು ಹಾಜರಾಗ ಬೇಕು. ಯಾವುದೇ ಕಾರಣ ನೀಡಿ ತಪ್ಪಿಸುವ ದುಸ್ಸಾಹಸ ಮಾಡಬಾರದು. ತಪ್ಪಿಸಿದರೆ ಅಂತಹವರ ವಿರುದ್ಧ ಜಾಮೀನು ರದ್ದು ಮಾಡುವಂತೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತೇವೆ. ಇಂದಿನ ಪರೇಡ್ ನಡೆಯುವ ಮಾಹಿತಿ ನೀಡಿದರೂ ಗೈರಾದ ರೌಡಿಗಳ ವಿರುದ್ಧ ಕಲಂ 110ರ ಅಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.‘ಕಾನೂನು ಸುವ್ಯವಸ್ಥೆ ಹಾಳಾಗ ದಂತೆ, ಸಾಮಾಜಿಕ ಶಾಂತಿಗೆ ಭಂಗವುಂಟು ಮಾಡದಂತೆ ರೌಡಿಗಳು ನಡೆದುಕೊಳ್ಳಬೇಕು. ಸಾರ್ವಜನಿಕ ರಲ್ಲಿ ಭಯದ ವಾತಾವರಣ ಸೃಷ್ಟಿಸುವ ರೀತಿಯಲ್ಲಿ ದುರ್ವರ್ತನೆ ಮಾಡ ಬಾರದು. ಸಮಾಜಘಾತುಕ ಚಟುವಟಿಕೆಗಳಿಂದ ಸಂಪೂರ್ಣ ದೂರವಿರಬೇಕು’ ಎಂದು ಅವರು ಎಚ್ಚರಿಸಿದರು.ಚಿತ್ತಾಪುರ, ವಾಡಿ, ಶಹಾಬಾದ, ಮಾಡಬೂಳ ಮತ್ತು ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ 219 ರೌಡಿಗಳನ್ನು ಕರೆಸಲಾಗಿತ್ತು. ರೌಡಿಗಳ ಪರೇಡ್ನಲ್ಲಿ ಚಿತ್ತಾಪುರ ಸಿಪಿಐ ಮಹಾಂತೇಶ ಪಾಟೀಲ್, ಕಾಳಗಿ ಸಿಪಿಐ ಭೋಜರಾಜ ರಾಠೋಡ್, ಪಿಎಸ್ಐಗಳಾದ ನಟರಾಜ ಲಾಡೆ, ಹುಷೇನ್ ಬಾಷಾ ಇದ್ದರು.