‘ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ರಾಜಕೀಯ ಪಕ್ಷಗಳ ಮುಖಂಡರು ಮುತ್ಸದ್ಧಿತನದಿಂದ ಮಾತನಾಡಬೇಕಿದೆ. ಆದರೆ, ಶಾ ಹುಂಬತನದ ಮಾತು ಅವರ ಬೌದ್ಧಿಕ ದಾರಿದ್ರ್ಯವನ್ನಷ್ಟೇ ತೋರಿಸುವುದಿಲ್ಲ, ಬದಲಿಗೆ ಬಿಜೆಪಿಯ ಹಿನ್ನಡೆಗೂ ಕಾರಣವಾಗಲಿದೆ’ ಎಂದು ಎಚ್ಚರಿಸಿದ್ದಾರೆ.ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಬೇಡ ಎಂದು ಶಿವಯೋಗ ಮಂದಿರದಲ್ಲಿ ಸ್ವಾಮೀಜಿಗಳು ಶಾ ಅವರಿಗೆ ಮನವಿ ಮಾಡಿದ್ದಾರೆ. ಅದರ ಬದಲು ಪುರಾತನವಾದ ವೀರಶೈವಕ್ಕೆ ಮಾನ್ಯತೆ ಕೊಡಿ ಎಂದು ಕೇಳಬಹುದಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ.