ಯಾದಗಿರಿ: ಇತ್ತೀಚೆಗೆ ಜಿಲ್ಲೆಯ ವಡಗೇರಾ ತಾಲ್ಲೂಕಿನ ಗುಂಡ್ಲೂರ, ಶಿವಪುರ, ಗೋನಾಲ, ಜೋಳದಡಗಿ, ಅಗ್ನಿಹಾಳ, ಕೊಂಗಂಡಿ ಗ್ರಾಮಗಳಲ್ಲಿ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ನೂರಾರು ಎಕರೆ ಭತ್ತದ ಬೆಳೆಹಾನಿ ಉಂಟಾಗಿದ್ದ ಪ್ರದೇಶಗಳಿಗೆ ಗುರುವಾರ ಶಾಸಕ ಡಾ.ಎ.ಬಿ.ಮಾಲಕರಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳೆಹಾನಿ ಆಗಿರುವುದನ್ನು ಖುದ್ದಾಗಿ ಕಂಡ ಶಾಸಕರು ರೈತರೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಮೊಬೈಲ್ ಮೂಲಕ ಅಧಿಕಾರಿಗಳೊಂದಿಗೆ ಮಾತನಾಡಿ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ಸೂಚಿಸಿದರು. ಮಾಜಿ ಶಾಸಕ ಚೆನ್ನಾರಡ್ಡಿ ಪಾಟೀಲ ತುನ್ನೂರ, ಬಸವರಾಜಪ್ಪಗೌಡ ವಡಗೇರಾ, ಡಾ.ಸುಭಾಷ್ ಕರಣಗಿ, ಸಿದ್ದಲಿಂಗರಡ್ಡಿ ಉಳ್ಳೆಸೂಗೂರು, ಅಶೋಕರಡ್ಡಿ ಗೋನಾಲ ಇದ್ದರು.