ಬ್ಯಾನರ್ನ ಕೆಳಗಡೆ ಸಾಸ್ತಾವು ನಾಗರಿಕರು ಎಂದು ಉಲ್ಲೇಖಿಸಲಾಗಿದೆ. ಒಂದು ಸರ್ಕಾರಿ ಶಾಲೆ, ಹಾಲು ಡೇರಿ, ದೇವಸ್ಥಾನ ಹಾಗೂ ಅತೀ ಹೆಚ್ಚು ಎಸ್.ಟಿ ಸಮುದಾಯದ ಮನೆಗಳಿವೆ. ಸರ್ಕಾರದಿಂದ ಸಾಕಷ್ಟು ಅನುದಾನ ಬಂದಿದ್ದರೂ, ಅದು ರಾಜಕೀಯ ದುರುದ್ದೇಶದಿಂದ ನಮ್ಮೂರಿಗೆ ಬಂದಿಲ್ಲ. ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೂ, ಜನ ಪ್ರತಿನಿಧಿಗಳಿಗೂ ಹಾಗೂ ಪಂಚಾಯಿತಿಗೂ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬ್ಯಾನರ್ನಲ್ಲಿ ಆರೋಪಿಸಲಾಗಿದೆ. ಅಲ್ಲದೆ ಇದು ಯಾವುದೇ ರಾಜಕೀಯ ಪ್ರೇರಿತ ಬಹಿಷ್ಕಾರವಲ್ಲ. ಆದರೆ, ಇದು ಎಲ್ಲ ಪಕ್ಷಗಳಿಗೂ ಅನ್ವಯಿಸುತ್ತದೆ ಎಂದು ಬ್ಯಾನರ್ನಲ್ಲಿ ಬಿಂಬಿಸಲಾಗಿದೆ.