ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ದ್ವೇಷ ಬಿತ್ತಿ ಸಮಾಜ ವಿಭಜಿಸುವ ಕೆಲಸ ಮಾಡುತ್ತಿದೆ: ರಾಹುಲ್‌ ವಾಗ್ದಾಳಿ

Last Updated 8 ಏಪ್ರಿಲ್ 2018, 14:01 IST
ಅಕ್ಷರ ಗಾತ್ರ

ಬೆಂಗಳೂರು: ದ್ವೇಷ, ಅಸೂಯೆ ಬಿತ್ತುವ ಮತ್ತು ಸಮಾಜವನ್ನು ವಿಭಜಿಸುವ ಕೆಲಸವನ್ನು ಜಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಆಪಾದಿಸಿದರು.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆಯುತ್ತಿರುವ ಕಾಂಗ್ರೆಸ್‌ ‘ಜನಾಶೀರ್ವಾದ’ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಅವರು ಚುನಾವಣಾ ಪ್ರಚಾರ ಭಾಷಣ ಮಾಡಿದರು.

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಪಕ್ಷಗಳ ಮುಖಂಡರನ್ನು ಬೆಕ್ಕು, ನಾಯಿಗೆ ಹೋಲಿಕೆ ಮಾಡಿ ನಿಕೃಷ್ಟವಾಗಿ ಪ್ರಾಣಿ, ಪಕ್ಷಿಗಳಿಗೆ ಹೋಲಿಸಿದ್ದಾರೆ. ಆದರೆ, ಕಾಂಗ್ರೆಸ್ ಎಂದೂ ಇಂಥಹ ಕೆಲಸ ಮಾಡಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಜೈಲಿಗೆ ಹೋಗಿ ಬಂದವರನ್ನು ಪಕ್ಕ ಕೂರಿಸಿಕೊಂಡು ಭ್ರಷ್ಟಾಚಾರದ ಮಾತುಗಳನ್ನು ಆಡುತ್ತಾರೆ. ಸಾವಿರಾರು ಕೋಟಿ ವಂಚನೆ ಮಾಡಿ ವಿದೇಶಕ್ಕೆ ಹೋದವರ ಬಗ್ಗೆ ಮೋದಿ ಮಾತನಾಡುವುದಿಲ್ಲ ಎಂದು ಆಪಾದಿಸಿದರು.

</p><p>ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಮಗ ಮೂರು ತಿಂಗಳಲ್ಲಿ ₹50 ಸಾವಿರವನ್ನು ಕೋಟ್ಯಾಂತ ರೂಪಾಯಿಗೆ ಪರಿವರ್ತಿಸುವ ಚಾಣಾಕ್ಷ್ಯತನ ಹೊಂದಿದ್ದಾರೆ ಎಂದು ಆಪಾದಿಸಿದರು.</p><p>ಬೆಂಗಳೂರಿಗೆ ವಿಶ್ವದ ಎಲ್ಲಾ ಕಡೆಯಿಂದ ಕೈಗಾರಿಕೆಗಳು ಬರುತ್ತಿವೆ ಎಂದರೆ ಅದು ಬೆಂಗಳೂರಿಗರ ಪರಿಶ್ರಮ ಎಂದರು.</p><p>ಕಾಂಗ್ರೆಸ್ ಅಧಿಕಾರಕ್ಕೆ ತರಲು ಒಗ್ಗಟ್ಟಿನ ಹೋರಾಟ ನಡೆಸಬೇಕು ಎಂದ ಅವರು, ಬಸವಣ್ಣ, ಕೆಂಪೇಗೌಡರನ್ನು ನೆನೆದು, ನುಡಿದಂತೆ ನಡೆ ಎಂಬ ಬಸವಣ್ಣನವರ ಆಶಯದಂತೆ ನಡೆಯಬೇಕಿದೆ. ಬಸಣ್ಣನವರ ವಿಚಾರಧಾರೆ ಮುಂದಿಟ್ಟು ಹೋಗುತ್ತಿದ್ದೇವೆ ಎಂದರು.</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT