ನಗರದ ಮುಖ್ಯರಸ್ತೆ, ಜವಾಹರ ರಸ್ತೆ, ಸಾರ್ವಜನಿಕ ಮೈದಾನ ಪ್ರದೇಶಗಳಲ್ಲಿ ಕೆಲವು ಸಂಘಟನೆಯವರು ಮಣ್ಣಿನ ಗಡಿಗೆಗಳಲ್ಲಿ ನೀರಿಟ್ಟು ಜನರ ದಾಹ ಇಂಗಿಸಲು ನೆರವಾಗಿದ್ದಾರೆ. ಕಲ್ಲಂಗಡಿ, ಅನನಾಸು ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ. ಸಹಜವಾಗಿ ದರವೂ ಅಲ್ಪ ಪ್ರಮಾಣದಲ್ಲಿ ಏರಿದೆ. ಕಬ್ಬಿನ ಹಾಲು, ಮಜ್ಜಿಗೆ ಮಾರಾಟವೂ ಏರಿಕೆ ಕಂಡಿದೆ. ಹಲವರಿಗೆ ಈ ಬೇಸಿಗೆ ಬದುಕು ಕಟ್ಟಿಕೊಟ್ಟಿದೆ.