ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲುಮತ ಸಮಾಜದ ಪ್ರಮುಖರು ಬಿಜೆಪಿಗೆ

Last Updated 10 ಏಪ್ರಿಲ್ 2018, 5:30 IST
ಅಕ್ಷರ ಗಾತ್ರ

ಮುಧೋಳ: ತಾಲ್ಲೂಕಿನ ಮಿರ್ಜಿ ಗ್ರಾಮದಲ್ಲಿ ಹಾಲುಮತ ಸಮಾಜದ ನೂರಕ್ಕೂ ಅಧಿಕ ಪ್ರಮುಖರ ಬಿಜೆಪಿ ಸೇರ್ಪಡೆಗೊಂಡರು.

ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ.ಆರ್.ಮಾಚಪ್ಪನವರ,ಚುನಾವಣಾ ಉಸ್ತುವಾರಿ ಸಿ.ವಿ.ಕೋಕೇಶಗೌಡ ಮಾತನಾಡಿ‘ಪ್ರಧಾನಿ ಮೋದಿ ದೇಶದ ಬಡವರು, ರೈತರು, ಹಿಂದುಳಿದ ವರ್ಗದ ಅಭಿವೃದ್ಧಿಗೆ ಅನುಷ್ಠಾನಗೊಳಿಸಿದ ಕಾರ್ಯಕ್ರಮ ಹಾಗೂ ಯಡಿಯೂರಪ್ಪ ಆಡಳಿತದ ಯೋಜನೆಗಳನ್ನು ಪ್ರತಿ ಮತದಾರರಿಗೆ ಮನವರಿಕೆ ಮಾಡಬೇಕು’ ಎಂದು ಅವರು ಹೇಳಿದರು.

ಎಪಿಎಂಸಿ ಅಧ್ಯಕ್ಷ ಆರ್.ಕೆ.ಮಳಲಿ, ಉದಯ ಸಾರವಾಡ, ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಗಿರೀಶಗೌಡ ಪಾಟೀಲ, ಶ್ರೀಕಾಂತ ಗುಜ್ಜನ್ನವರ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ರಾಜ್ಯ ಕಿಸಾನ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆರ್.ಟಿ.ಪಾಟೀಲ, ಗಿರೆಪ್ಪಗೌಡ ಪಾಟೀಲ, ಬಸವರಾಜ ಮಳಲಿ ಅವರು ಮಾತನಾಡಿದರು.

ಮಹಾಲಿಂಗಪ್ಪ ಮುಧೋಳ, ಲಕ್ಷ್ಮಣ ದುರ್ಗಪ್ಪಗೋಳ, ಸಗರೆಪ್ಪ ಹೂಗಾರ, ಕಲ್ಲಪ್ಪ ಬೀಳಗಿ, ಹಣಮಂತ ಢವಳೇಶ್ವರ, ವಿಠಲ ಜೋತೆಪ್ಪಗೋಳ ನೇತೃತ್ವದಲ್ಲಿ 100 ಕ್ಕೂ ಅಧಿಕ ಪ್ರಮುಖರು ಬಿಜೆಪಿ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT