ಸಮಿತಿಯಲ್ಲಿದ್ದ ಕೆಲವು ಸದಸ್ಯರು ಹಿಂದೂ ಮತ್ತು ವೀರಶೈವ ವಿರೋಧಿಗಳು. ಅವರು ನೀಡುವ ವರದಿ ಯಾರ ಪರವಾಗಿರುತ್ತದೆ ಎಂಬುದನ್ನು ಬಹುತೇಕರು ಮೊದಲೇ ಊಹಿಸಿದ್ದರು. ಈ ಬಗ್ಗೆ ಅನೇಕ ಮಠಾಧೀಶರು, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು, ಜನಸಾಮಾನ್ಯರು ಹೇಳಿದ್ದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈಗ ಮಾತೆ ಮಹಾದೇವಿಯವರು ‘ಎಲ್ಲಾ ಲಿಂಗಾಯತರು ಕಾಂಗ್ರೆಸ್ಗೆ ಮತ ಹಾಕಿ’ ಎಂದು ಕರೆ ಕೊಟ್ಟಿದ್ದಾರೆ. ಈ ಸಮಿತಿಯ ವರದಿ ಹಾಗೂ ಪ್ರತ್ಯೇಕ ಧರ್ಮದ ನಿರ್ಧಾರ ನೇರವಾಗಿ ರಾಜಕೀಯ ಲಾಭ ಮತ್ತು ಹಿಂದೂಗಳನ್ನು ಒಡೆದಾಳುವ ಸ್ಪಷ್ಟ ಉದ್ದೇಶ ಹೊಂದಿದೆ ಎಂಬ ಅಭಿಪ್ರಾಯಗಳಿಗೆ ಉತ್ತರ ನೀಡಬೇಕಾದವರು ಯಾರು?