2013ರ ಚುನಾವಣೆಯಲ್ಲಿ ಬಿಎಸ್ಆರ್ನಿಂದ ಸ್ಪರ್ಧೆ ಮಾಡಿದ್ದ ತಿಪ್ಪೇಸ್ವಾಮಿ, ‘ಶ್ರೀರಾಮುಲು ನನಗೆ ರಾಜಕೀಯ ಗುರು’ ಎಂದು ಹೇಳಿದ್ದರು. ಟಿಕೆಟ್ ಸಿಗದೇ ಹೋದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಎಚ್ಚರಿಕೆಯನ್ನು ತಿಪ್ಪೇಸ್ವಾಮಿ ನೀಡಿದ್ದಾರೆ. ಹೀಗೆ ಆದಲ್ಲಿ ಗುರು–ಶಿಷ್ಯರ ಮಧ್ಯೆ ಪೈಪೋಟಿ ಏರ್ಪಡಲಿದೆ.ಕಾಂಗ್ರೆಸ್ನಲ್ಲೂ ಟಿಕೆಟ್ ಹಂಚಿಕೆ ತಲೆನೋವಾಗಿದೆ. ನಟ ಶಶಿಕುಮಾರ್, ಶಾಸಕ ಎನ್.ವೈ. ಗೋಪಾಲಕೃಷ್ಣ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಡಾ. ಬಿ. ಯೋಗೇಶ್ ಬಾಬು ಕಾಂಗ್ರೆಸ್ ಟಿಕೆಟ್ನ ಪ್ರಮುಖ ಆಕಾಂಕ್ಷಿಗಳು.