ಮರು ಡಾಂಬರೀಕರಣ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ವಾಹನ ಸಂಚಾರ ತಡೆದೂ ಪ್ರತಿಭಟನೆ ನಡೆಸಿದ್ದರು. ನಾಲ್ಕೈದು ತಿಂಗಳು ಕಳೆದರೂ ಆಡಳಿತದಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಈ ಪ್ರದೇಶದ ಕೆಲವು ಕ್ರಿಯಾಶೀಲ ಗ್ರಾಮಸ್ಥರು ಸಂಘಟಿತರಾದರು. ತಾವೇ ರಸ್ತೆಯ ದುರಸ್ತಿ ಕಾರ್ಯಕ್ಕೆ ಮುಂದಾದರು. ಸಾರ್ವಜನಿಕರಿಂದ ದೇಣಿಗೆ ಮೂಲಕ ಸುಮಾರು ₹ 1.25 ಲಕ್ಷ ಸಂಗ್ರಹಿಸಿ ಕಾಮಗಾರಿ ಕೈಗೊಂಡರು. ಈ ಕಾರ್ಯದಲ್ಲಿ ಸ್ಥಳೀಯ ಸೇವಾ ಸಹಕಾರ ಸಂಘ, ಆನಗೋಡ ಗ್ರಾಮ ಪಂಚಾಯ್ತಿ ಮತ್ತು ದಾನಿಗಳೂ ಕೈಜೋಡಿಸಿದರು.