ಜಾರಿಗೊಳಿಸಿದ್ದ ಕಾಯ್ದೆ ಅನ್ವಯ ಅಪರಾಧ ಪ್ರಕರಣಗಳಿಗೆ ಮೊಕದ್ದಮೆ ದಾಖಲಿಸಬೇಕು. ಪ್ರಕರಣದ ಪತ್ತೆಗೆ ಚುನಾವಣಾ ನೀತಿ ಸಂಹಿತೆ ನಿಯಮ ಪಾಲನೆ ಮಾಡಬೇಕು. ಏಪ್ರಿಲ್ 17ರ ನಂತರ ಮತಗಟ್ಟೆಗಳಿಗೆ ಚುನಾವಣಾ ಆಯೋಗದ ವೀಕ್ಷಕ ಅಧಿಕಾರಿಗಳು ಭೇಟಿ ನೀಡುವರು. ದೋಷ ಕಂಡುಬಂದರೆ ಸಂಬಂಧಪಟ್ಟ ಸೆಕ್ಟರ್ ಮ್ಯಾಜಿಸ್ಟ್ರೇಟ್ ಅಧಿಕಾರಿ ವಿರುದ್ಧ ಕ್ರಮ ಕೈಕೊಳ್ಳಲಾಗುವುದು. ಸ್ಕ್ವಾಡ್, ಪಿಆರ್ಒ ಕಾರ್ಯಚಟುವಟಿಕೆ ಪ್ರಮುಖವಾಗಿದೆ. ಪಿಡಿಒ, ವಿಎ, ಬಿಎಲ್ಒ ಸಿಬ್ಬಂದಿ ಚುರುಕಿನಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.