'ಪ್ರತ್ಯೇಕತೆಯ ದನಿಯನ್ನು ಮೊಳಕೆಯಲ್ಲೇ ಚಿವುಟಬೇಕು' ಎಂದು ಎ. ಸೂರ್ಯಪ್ರಕಾಶ್ (ಪ್ರ.ವಾ., ಸೂರ್ಯ-ನಮಸ್ಕಾರ, ಏ. 12) ಅಪ್ಪಣೆ ಕೊಟ್ಟಿರುವರಾದರೂ ಪ್ರತ್ಯೇಕತೆಯ ಮನೋಭಾವವನ್ನು ಸಂಪೂರ್ಣವಾಗಿ ಚಿವುಟುವುದು ಅಸಾಧ್ಯ. ಇದಕ್ಕೆ ಕೇಂದ್ರದಲ್ಲಿ ಚುಕ್ಕಾಣಿ ಹಿಡಿದ ಸರ್ಕಾರಗಳೇ ಕಾರಣ. ಬಹುಪಾಲು ಸರ್ಕಾರಗಳು ಇಲ್ಲಿಯವರೆಗೂ ಹಿಂದಿ ಭಾಷಿಕ ರಾಜ್ಯಗಳ ಪರವಾಗಿಯೇ ನಿಲುವು ತಳೆದಿರುವುದರಿಂದ ಜನರಲ್ಲಿ ಅಂತಹ ಭಾವನೆ ಮಡುಗಟ್ಟಿದೆ.