ರಾಜ್ಯ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟವಾಗಿದ್ದೇ ತಡ ಎಲ್ಲ ಪಕ್ಷಗಳೂ ‘ಹಂಚುವ ಕೆಲಸ’ಕ್ಕೆ ವೇಗ ತುಂಬಿವೆ. ನೀತಿ ಸಂಹಿತೆ ಎಂಬುದು ಲೆಕ್ಕಕ್ಕೇ ಇಲ್ಲ. ನಿಯಮಗಳನ್ನು ಗಾಳಿಗೆ ತೂರುವ ಕೆಲಸ ಎಗ್ಗಿಲ್ಲದೆ ಸಾಗಿದೆ. ಸೀರೆ, ಕುಕ್ಕರ್, ಟಿ.ವಿ., ಹಣ ಹಂಚುವ ಕೆಲಸ ಅಬಾಧಿತವಾಗಿ ನಡೆದಿದೆ. ಕೆಲವರು ಸಿಕ್ಕಿಬಿದ್ದಿದ್ದಾರೆ. ಆದರೆ ಅವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಇವೆಲ್ಲ ಯಾರಿಗೆ ಸೇರಿದ್ದು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಅದನ್ನು ಪ್ರಶ್ನಿಸಬೇಕಾದ ಮತದಾರ ಪ್ರಭುಗಳು ಮೌನವಾಗಿರುವುದು ವಿಪರ್ಯಾಸವೇ ಸರಿ.