ಮಹಾರಾಷ್ಟ್ರದ ಸೊಲ್ಲಾಪುರ, ತೆಲಂಗಾಣದ ವಿವಿಧ ಭಾಗ, ರಾಜ್ಯದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಕಲಬುರ್ಗಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ರೈತರು ಜೋಡೆತ್ತು ಖರೀದಿಗಾಗಿ ಬರುವುದು ವಾಡಿಕೆ. ಈ ಬಾರಿ ಜಾತ್ರೆಯಲ್ಲಿ ಜೋಡೆತ್ತುಗಳ ಬೆಲೆ ಕೇಳಿದವರಿಗೆ ಬಿಸಿಲ ಝಳವನ್ನೂ ಮೀರಿ ಬೆವರಿಳಿಸುವಂತಿದೆ.