ಜಿಲ್ಲೆಯ ಮೂರು ಮೀಸಲು ವಿಧಾನಸಭಾ ಕ್ಷೇತ್ರಗಳ ಪೈಕಿ ಚಿತ್ತಾಪುರದಲ್ಲಿ ಬಲಗೈ ಸಮುದಾಯದ ಪ್ರಿಯಾಂಕ್ ಖರ್ಗೆ ಅವರಿಗೆ, ಚಿಂಚೋಳಿಯಲ್ಲಿ ಲಂಬಾಣಿ ಸಮುದಾಯದ ಡಾ. ಉಮೇಶ ಜಾಧವ್ ಅವರಿಗೆ ಟಿಕೆಟ್ ನೀಡಿದ ಕಾರಣ ಗ್ರಾಮೀಣದಲ್ಲಿ ಎಡಗೈ ಸಮುದಾಯದ ವಿಜಯಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಹಿಂದೆ ಪರಾಭವಗೊಂಡಿದ್ದ ಚಂದ್ರಿಕಾ ಪರಮೇಶ್ವರ ಮತ್ತು ಶಾಮ ನಾಟೀಕಾರ ಕೂಡ ಪ್ರಬಲ ಆಕಾಂಕ್ಷಿಗಳಾಗಿದ್ದರು.