ಮೈದಾನದಲ್ಲಿ ಅಳವಡಿಸಿದ್ದ ಶಾಮಿಯಾನ ಭಾರಿ ಮಳೆ ಗಾಳಿಗೆ ಕಿತ್ತು ಹೋಗಿ ಸಂಘಟಕರು ಪರದಾಡಿದರು. ಟೂರ್ನಿ ವೀಕ್ಷಣೆಗೆ ಬಂದಿದ್ದ ಜನ ಮಳೆಯಲ್ಲಿ ತೊಯ್ದರು. ನಂತರ ಸಮಾರೋಪ ಸಮಾರಂಭವನ್ನು ಚನ್ನಬಸಪ್ಪ ಸಭಾಂಗಣಕ್ಕೆ ಸ್ಥಳಾಂತರಿಸಿ ಬಹುಮಾನ ವಿತರಿಸಲಾಯಿತು. ಕಳೆದ ಕೆಲವು ದಿನಗಳಿಂದ ಮೋಡ ಕವಿದು, ತುಂತುರು ಮಳೆಯಾಗುತ್ತಿತ್ತು. ಆದರೆ, ಭಾನುವಾರ ಸುರಿದ ಮಳೆಯಿಂದ ಕೃಷಿಕರು ಖುಷಿಗೊಂಡಿದ್ದಾರೆ. ಪಟ್ಟಣ ಸೇರಿದಂತೆ ಹಾನಗಲ್ಲು ಗ್ರಾಮ, ಶಾಂತಳ್ಳಿ ಹೋಬಳಿಯ ಕೆಲವೆಡೆ ಹಾಗೂ ಬಿಟಿಕಟ್ಟೆ, ಕಾಗಡಿಕಟ್ಟೆಯಲ್ಲಿ ಉತ್ತಮ ಮಳೆಯಾಗಿದೆ.