ಭಾನುವಾರ ಮಣಿಪಾಲದ ಎಂಐಟಿ ಕ್ರೀಡಾಂಗಣದಲ್ಲಿ ಜರಗಿದ ಅಂತಿಮ ಟೂರ್ನಮೆಂಟ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಥಾಣೆ ಸುಪರ್ಬ್ಸ್ ತಂಡವು ಕುನಾಲ್ ಶಿಂಧೆ ಅವರ ಮಾರಕ ಬೌಲಿಂಗ್ಗೆ ಮೊದಲ ಮೂರು ವಿಕೆಟ್, ಮೂರು ರನ್ ಪಡೆಯುವಷ್ಟರಲ್ಲೆ ಒಪ್ಪಿಸಿತು. ನಾಲ್ಕನೆ ವಿಕೆಟ್ನಲ್ಲಿ ಥಾಣೆ ತಂಡವು ಅಲ್ಪ ಮಟ್ಟಿನ ಚೇತರಿಕೆ ಕಾಣುವಷ್ಟರಲ್ಲಿ ಬೌಲಿಂಗ್ಗೆ ಇಳಿದ ದಿನೇಶ್ ಅವರು ಉಳಿದ ಮೂರು ವಿಕೆಟ್ ಕಬಳಿಸಿ ಮರ್ಮಾಘಾತ ನೀಡಿದರು. ಥಾಣೆ ತಂಡವು 19.5 ಓವರ್ನಲ್ಲಿ 82 ರನ್ಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಕುನಾಲ್ ಶಿಂಧೆ 10 ಕ್ಕೆ 4, ದಿನೇಶ್ 14ಕ್ಕೆ 3, ಮಹೇಶ್, ತುಶಾರ್ ಮತ್ತು ಸಾಗರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.