ಗ್ರಾಮೀಣ ಬದುಕು, ಸೇಡಿನ ಕುರಿತ ಕಥೆಯ ಎಳೆ ಹೊಂದಿರುವ ಈ ಸಿನಿಮಾ ಸುಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿದೆ. ವಿಮರ್ಶಕರು ಮತ್ತು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇತ್ತೀಚೆಗೆ ಸಿನಿಮಾ ವೀಕ್ಷಿಸಿದ ಪವನ್ ಕಲ್ಯಾಣ್ ಕೂಡ ತನ್ನ ಸೋದರಳಿಯನ ನಟನೆ ಹಾಗೂ ಇಡೀ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.