‘ವಿದ್ಯಾಕುಮಾರಿ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಮುಳಬಾಗಿಲು ತಹಶೀಲ್ದಾರ್ ಮೇಲೆ ಒತ್ತಡ ಹೇರಿ ಪ್ರಸ್ತಾವ ಪಡೆದುಕೊಂಡು ಅರ್ಜಿ ವಿಚಾರಣೆ ನಡೆಸದೆ ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ. ಈ ಪ್ರಕರಣದಲ್ಲಿ ಡೊಮನಿಕ್ರ ವಂಶವೃಕ್ಷ ಪರಿಶೀಲಿಸದೆ, ಕುಟುಂಬದ ಆದಾಯವನ್ನು ದಾಖಲೆಪತ್ರ ಸಮೇತ ಅರಿಯದೆ ಮತ್ತು ಕುಟುಂಬ ಸದಸ್ಯರ ವಿವರವನ್ನು ಮುಚ್ಚಿಟ್ಟು ಭೂ ಸುಧಾರಣೆ ಕಾಯ್ದೆ ಉಲ್ಲಂಘಿಸಿ ಜಮೀನು ಖರೀದಿಗೆ ಅನುಮತಿ ನೀಡಿದ್ದಾರೆ’ ಎಂದು ದೂರಿದರು.