ಗುಡಿ-ಗುಂಡಾರದ ಅನ್ನದಾನ ಕಾರ್ಯಕ್ರಮಗಳನ್ನು ‘ಸ್ಪಾನ್ಸರ್’ ಪಡೆದು ಮಾಡುವ ಸ್ಥಿತಿಗೆ ತಲುಪಿರುವ ಇಂದಿನ ಈ ಮಾರುಕಟ್ಟೆ ಪ್ರಭಾವದ ದಿನಗಳಲ್ಲಿ, ಆಧುನಿಕತೆ ಕೇವಲ ಸರಕಿನ ರೂಪದಲ್ಲಿ ನಮ್ಮ ಮೈ ಹೊಕ್ಕಂತೆ ಕಾಣುತ್ತದೆ. ನಮ್ಮ ತಲೆ ಮತ್ತು ಹೃದಯ ಇನ್ನೂ ಬಸವನ ಕಾಲದ ಜಿಡ್ಡುಬಿದ್ದ ಸ್ಥಿತಿಯಲ್ಲೇ ಇವೆ. ಅವುಗಳಲ್ಲಿ ಇನ್ನಾದರು ಫ್ಲೆಕ್ಸ್ಗಳಲ್ಲಿ ಸಿನಿತಾರೆಯರಂತೆ ಮಿನುಗುವ, ಫೋಟೊ ಫ್ರೇಮ್ನಲ್ಲಿ ಬಂಧಿಯಾದ ಬಸವಣ್ಣನ ಬದುಕಿನ ಸರಳ ಮಾತು ಆತನನ್ನು ‘ಸಾಂಸ್ಕೃತಿಕ ಬಂಡವಾಳ’ವನ್ನಾಗಿ ಮಾಡಿಕೊಂಡ ಪ್ರತಿಯೊಬ್ಬರಿಗೂ ತಲುಪಬೇಕಿದೆ. ಇದೇ ನನ್ನ ನಿಜದ ಬಸವತನ.