ಈ ಭೂಮಿ ಮೇಲೆ ಬುದ್ಧನ ನಂತರ ಮೂಡಿದ ಮತ್ತೊಂದು ಮಹಾಬೆಳಕು ನಮ್ಮ ಬಸವಣ್ಣ. ‘ಜಗದ ಕಾರ್ಮಿಕರೇ ಒಂದಾಗಿ’ ಎಂದ ಕಾರ್ಲ್ ಮಾರ್ಕ್ಸ್, ಸತ್ಯ-ಅಹಿಂಸೆ ಬೋಧಿಸಿದ ಗಾಂಧೀಜಿ ಮತ್ತು ಸಮಾನತೆಗಾಗಿ ಹಂಬಲಿಸಿದ ಅಂಬೇಡ್ಕರರಿಗಿಂತ 700 ವರ್ಷಗಳ ಹಿಂದೆಯೇ ಮಾದಾರ ಚೆನ್ನಯ್ಯನ ಮಗ ನಾನು ಎಂದು ಹೇಳಿ, ಅಂತರ್ಜಾತೀಯ ವಿವಾಹವನ್ನೂ ಮಾಡಿಸಿ ಜಾತಿವಿನಾಶಕ್ಕೆ ಪ್ರಯತ್ನಪಟ್ಟ ವಿಶ್ವದ ಮೊತ್ತಮೊದಲ ಕಾರ್ಮಿಕ ನಾಯಕ ಬಸವಣ್ಣ. ಹಾಗಾಗಿಶರಣ ಸಂಸ್ಕೃತಿಯೆಂದರೆ ಮತ್ತೇನಲ್ಲ, ಅದು ಕಾಯಕ ಸಂಸ್ಕೃತಿ.