ಜನರಿಗೆ ಈ ರೀತಿಯ ಯಾತನೆ ಯಾಕೆ? ಸಿಬ್ಬಂದಿ ಇರುವುದು ಜನರಿಗಾಗಿಯೇ ಅಲ್ಲವೇ? ಅದನ್ನು ನೆನಪಿನಲ್ಲಿಟ್ಟು ಕನಿಷ್ಠ ವಿನಯವನ್ನಾದರೂ ಪ್ರದರ್ಶಿಸಬಾರದೇ? ಕ್ಯಾಷ್ ಕೌಂಟರ್ಗಳನ್ನು ಹೆಚ್ಚಿಸಿ, ಗ್ರಾಹಕ ಎಷ್ಟೇ ಹಣ ಪಡೆಯಲಿ, ಒಂದೇ ಕಡೆ ಅದನ್ನು ನೀಡಿ, ಗೊಂದಲರಹಿತ ವ್ಯವಸ್ಥೆ ಮಾಡಬಾರದೇ? ತಾಂತ್ರಿಕ ಅಡಚಣೆಯ ನೆಪ ಹೇಳಿ ಗ್ರಾಹಕರಿಗೆ ಹಿಂಸೆ ನೀಡುವುದನ್ನು ಬ್ಯಾಂಕ್ಗಳು ಇನ್ನಾದರೂ ನಿಲ್ಲಿಸಲಿ.