ರೆಡ್ಡಿ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಆಸಕ್ತಿ ತೋರಿತ್ತು. ಅವರ ಹೆಸರನ್ನು ಮಾತ್ರ ಬಿಜೆಪಿ ಕ್ಷೇತ್ರ ಘಟಕದಿಂದ ಕಳುಹಿಸಲಾಗಿತ್ತು. ಬುಧವಾರ ಅಭ್ಯರ್ಥಿಯ ಹೆಸರು ಪ್ರಕಟವಾಗುವ ಸಾಧ್ಯತೆ ಇದೆ. ಆದರೆ, ಮಂಗಳವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಪದ್ಮನಾಭ ರೆಡ್ಡಿ, ‘ನನ್ನ ಬದಲು ಕ್ಷೇತ್ರ ಘಟಕದ ಮಾಜಿ ಅಧ್ಯಕ್ಷ ಎಂ.ಎನ್.ರೆಡ್ಡಿ ಅವರನ್ನು ಕಣಕ್ಕಿಳಿಸಿ’ ಎಂದರು.