ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಕಾಯಿಲೆಯನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯ ಧೀರಜ್ ಕಾರಂತ್ ಸಲಹೆ ನೀಡಿದರು. ಪಿತ್ತಜನಕಾಂಗದ ಕಸಿ ಹಾಗೂ ಸ್ಟೆಮ್ಸೆಲ್ ಚಿಕಿತ್ಸೆಯನ್ನು ಇತ್ತೀಚೆಗೆ ಸಂಶೋಧಿಸಲಾಗಿದೆ. ಗಂಭೀರ ಸ್ವರೂಪಕ್ಕೆ ಹೋಗುವವರೆಗೂ ಯಕೃತ್ಗೆ ಸಂಬಂಧಿಸಿದ ಕಾಯಿಲೆ ಅರಿವಿಗೆ ಬರುವುದಿಲ್ಲ. ಆಗಾಗ್ಗೆ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು ಎಂದು ಹೇಳಿದರು.