ಚನ್ನರಾಯಪಟ್ಟಣ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಸುಮಾರು ₹ 1000 ಕೋಟಿ ಬಿಡುಗಡೆ ಮಾಡಲಾಗಿದ್ದು, 150 ಕೋಟಿ ವೆಚ್ಚದ ಹಾಲಿನ ಡೇರಿ ಬಂದಿರುವುದು ತಾಲೂಕಿನ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಹಕಾರಿಯಾಗಿದೆ. ಈ ಭಾಗದ 22 ಕೆರೆಗಳನ್ನು ತುಂಬಿಸುವ ಶೇ 75 ಭಾಗ ಕಾಮಗಾರಿ ಪೂರ್ಣಗೊಂಡಿದೆ. ಇದರಿಂದ ಅಂತರ್ಜಲ ಹೆಚ್ಚಿ ಕುಡಿಯುವ ನೀರು, ತೆಂಗಿನ ತೋಟಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು.
ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಪರಮ ದೇವರಾಜೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಮತಾ ರಮೇಶ್, ಎಪಿಎಂಸಿ ಸದಸ್ಯೆ ಶಿಲ್ಪಾ ಶ್ರೀನಿವಾಸ್, ಮುಖಂಡರಾದ ಕೃಷ್ಣೇಗೌಡ, ಹಡೇನಹಳ್ಳಿ ಎಚ್.ಎನ್.ಲೋಕೇಶ್, ಪಿ.ಕೆ.ಮಂಜೇಗೌಡ, ಎ.ಆರ್.ಶಿವರಾಜ್, ಕಬ್ಬಾಳು ರಮೇಶ್, ಪಾಲಾಕ್ಷ ಇದ್ದರು.