ಅಂಬೇಡ್ಕರ್ ಜಯಂತಿಯನ್ನು ದೇಶದೆಲ್ಲೆಡೆ ಇತ್ತೀಚೆಗೆ ಆಚರಿಸಲಾಯಿತು. ಅಂಬೇಡ್ಕರ್ ಪ್ರತಿಮೆಗೆ ಸವರ್ಣೀಯರು, ಕೆಲವು ರಾಜಕೀಯ ಪಕ್ಷಗಳ ಮುಖಂಡರು–ಕಾರ್ಯಕರ್ತರು ಮಾಲಾರ್ಪಣೆ ಮಾಡಿ ಅಪವಿತ್ರಗೊಳಿಸಿದ್ದಾರೆ ಎಂದು ದಲಿತ ಸಂಘಟನೆಗಳವರು ಆ ಪ್ರತಿಮೆಗಳಿಗೆ ಕೆಲವು ಕಡೆ ಹಾಲು- ನೀರಿನ ಅಭಿಷೇಕ ಮಾಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ.