ಪಕ್ಷಗಳು ಮೊದಲು ಸಂಭವನೀಯ ಅಭ್ಯರ್ಥಿಗಳ ಪಟ್ಟಿ ತಯಾರಿಸಬೇಕು. ಅಂಥವರನ್ನು ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದಲ್ಲಿ ಪಕ್ಷದ ಸದಸ್ಯರು ಮತ ಹಾಕಿ ಚುನಾಯಿಸಬೇಕು. ಪಕ್ಷದ ಆಂತರಿಕ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗೆ ಆ ಕ್ಷೇತ್ರದ ಟಿಕೆಟ್ ನೀಡುವುದು ಸೂಕ್ತ. ಆಗ ಪರಿಸ್ಥಿತಿ ಸ್ವಲ್ಪ ಸುಧಾರಿಸಬಹುದು. ನಿಜವಾದ ಕಾರ್ಯಕರ್ತರಿಗೆ ತಮ್ಮ ಅಭ್ಯರ್ಥಿಯ ಪರ ಮತ ಕೇಳಲು ಆತ್ಮವಿಶ್ವಾಸ, ಹುಮ್ಮಸ್ಸು ಇರುತ್ತದೆ. ಕೀಳು ಮಟ್ಟದ ಕಿತ್ತಾಟಗಳಿಂದ ಯಾರಿಗೂ ಒಳಿತಲ್ಲ.