ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎನ್. ಮಂಜುನಾಥ್‌ಗೆ ‘‍‍‍ಪವಾಡ ಶ್ರೀ’ ಪ್ರಶಸ್ತಿ ಪ್ರದಾನ

Last Updated 18 ಏಪ್ರಿಲ್ 2018, 19:04 IST
ಅಕ್ಷರ ಗಾತ್ರ

ನೆಲಮಂಗಲ: ಇಲ್ಲಿನ ಬಸವಣ್ಣ ದೇವರ ಮಠದಲ್ಲಿ ಬಸವಣ್ಣ ದೇವರ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.

ಇದೇ ಸಂದರ್ಭದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರಿಗೆ ‘ಪವಾಡ ಶ್ರೀ’ ಪ್ರಶಸ್ತಿಯನ್ನು ಸಿದ್ಧಲಿಂಗ ಸ್ವಾಮೀಜಿ ನೀಡಿ ಗೌರವಿಸಿದರು.

ಸಂಜೆ ಅಶ್ವಾರೂಢ ಬಸವಣ್ಣನನ್ನು ಜನಪದ ಕಲಾ ಪ್ರಕಾರಗಳು ಮತ್ತು ಬಸವಣ್ಣದೇವರ ಉತ್ಸವ ಮೂರ್ತಿ, ಹಸುಗಳು, ಶರಣರ ವಚನಗಳ ವಾಚನ, ಬಸವಣ್ಣನ ಮತ್ತು ಶರಣರ ಛದ್ಮವೇಷದಾರಿಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮಕ್ಕಳ ಮತ್ತು ಮಹಿಳೆಯರ ವೀರಗಾಸೆ, ಕಂಸಾಳೆ ಮತ್ತು ನಗಾರಿ ಎಲ್ಲರ ಗಮನ ಸೆಳೆಯಿತು.

ಸುಮಾರು ಒಂದು ಕಿಲೊ ಮೀಟರ್‌ ಉದ್ದದಷ್ಟು ಮೆರವಣಿಗೆ ಪಟ್ಟಣದಲ್ಲಿ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಯಿತು. ಇಡೀ ದಿನ ಬಸವಣ್ಣ ದೇವರ ಮಠದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT