‘ಇದು ಭಕ್ತಿಪ್ರಧಾನ ಸಿನಿಮಾ. ಭಕ್ತಿ ಎಂಬುದು ಪ್ರೀತಿಯ ಮತ್ತೊಂದು ಮುಖ. ಉತ್ತರ ಕರ್ನಾಟಕದ ಯಾದಗಿರಿ, ರಾಯಚೂರು, ಗದಗ ಹೀಗೆ ಹಲವು ಪ್ರದೇಶಗಳಲ್ಲಿ ಮೌನೇಶ್ವರರು ಪವಾಡಗಳನ್ನು ಮಾಡಿದ್ದಾರೆ. ಆ ಪವಾಡಗಳನ್ನು ಆಧರಿಸಿಯೇ ಸಿನಿಮಾ ಮಾಡಿದ್ದೇವೆ. ಭಕ್ತಿಯೇ ಇಲ್ಲದವರಿಗೆ ಈ ಸಿನಿಮಾದಲ್ಲಿ ಮೌನೇಶ್ವರರ ಮಾತುಗಳಿಂದ ಜೀವನಸ್ಫೂರ್ತಿ ಸಿಗುತ್ತದೆ’ ಎಂಬುದು ನಿರ್ದೇಶಕ ಭೀಮರಾಜ್ ಅವರ ವಿವರಣೆ.