ಭದ್ರತಾ ಪಡೆಗಳ ಸಿಬ್ಬಂದಿ ಪಿಲೆಟ್ ಗನ್ ಮತ್ತು ಅಶ್ರುವಾಯು ಶೆಲ್ಗಳನ್ನು ಪ್ರಯೋಗಿಸಿದರು ಎಂದು ವರದಿಯಾಗಿದೆ. ಕಠುವಾ ಘಟನೆಯನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿರುವುದರಿಂದ ಶ್ರೀನಗರ, ಗಂಧೇರ್ಬಲ್, ಪುಲ್ವಾಮಾ, ಕುಲ್ಗಾಂ, ಶೋಪಿಯಾನ್ ಮತ್ತು ಅನಂತನಾಗ್ ಜಿಲ್ಲೆಗಳಲ್ಲಿ ಅಧಿಕಾರಿಗಳು ಗುರುವಾರ ತರಗತಿಗಳನ್ನು ರದ್ದುಪಡಿಸಿದ್ದರು.