ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಾವುದೇ ಮೊತ್ತ ಸವಾಲಿನದ್ದಲ್ಲ’: ರಾಬಿನ್ ಉತ್ತಪ್ಪ

Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಜೈಪುರ: ‘ಕ್ರಿಕೆಟ್ ಈಗ ಸಾಕಷ್ಟು ಬದಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಯಾವುದೇ ಮೊತ್ತ ಸವಾಲಿನದ್ದಲ್ಲ. ಎದುರಾಳಿಗಳು ಎಷ್ಟು ರನ್ ಕಲೆ ಹಾಕಿದರೂ ಬೆನ್ನತ್ತಿ ಗೆಲ್ಲುವುದು ಕಷ್ಟವಲ್ಲ’ ಎಂದು ಕೋಲ್ಕತ್ತ ನೈಟ್ ರೈಡರ್ಸ್‌ನ ಬ್ಯಾಟ್ಸ್‌ಮನ್‌ ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟರು.

ಬುಧವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಉತ್ತಪ್ಪ 48 ರನ್‌ ಗಳಿಸಿದ್ದರು. 160 ರನ್‌ಗಳ ಗುರಿ ಬೆನ್ನತ್ತಿದ ಕೋಲ್ಕತ್ತ ಏಳು ವಿಕೆಟ್‌ಗಳಿಂದ ಗೆದ್ದಿತ್ತು.

‘ಕ್ರಿಕೆಟ್‌ನಲ್ಲಿ ಈಗ ತಂತ್ರಗಳಿಗಿಂತ ಶಕ್ತಿಯೇ ಪ್ರಮುಖವಾಗುತ್ತದೆ. ಬ್ಯಾಟಿಂಗ್ ಬಲ ಇರುವ ತಂಡಗಳಿಗೆ ಎಂಥ ಮೊತ್ತವೂ ಸುಲಭವಾಗುತ್ತದೆ’ ಎಂದು ಅವರು ಹೇಳಿದರು.

‘ಕೆಕೆಆರ್ ಈ ಬಾರಿ ಉತ್ತಮ ಆಟ ಆಡುತ್ತಿದೆ. ಈಗಾಗಲೇ ಐದು ಪಂದ್ಯಗಳಲ್ಲಿ ಮೂರನ್ನು ಗೆದ್ದಿದ್ದು ಪಾಯಿಂಟ್‌ ಪಟ್ಟಿಯ ಅಗ್ರಸ್ಥಾನದಲ್ಲಿದೆ. ಇದು ಖುಷಿ ತಂದಿದೆ. ದೇಶಿ ಟೂರ್ನಿಗಳಲ್ಲಿ ಲಯ ಕಂಡುಕೊಳ್ಳಲು ಸಾಧ್ಯವಾಗದಿದ್ದರೂ ಈ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಮಾಡಲು ಆಗುತ್ತಿದೆ. ಇದು ಕೂಡ ಸಂತಸದ ವಿಷಯ’ ಎಂದು ಉತ್ತಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT