ಚಿಕ್ಕಮಗಳೂರು: ತಾಲ್ಲೂಕಿನ ಲಕ್ಯಾ ಸಮೀಪದ ದೇವರಹಳ್ಳಿ ಗೇಟ್ ಬಳಿ ಗುರುವಾರ ಕೆಎಸ್ಆರ್ಟಿಸಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ, ಕಾರಿನಲ್ಲಿದ್ದ ನಾಲ್ವರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತಪಟ್ಟವರು ಮತ್ತು ಗಾಯಾಳುಗಳು ಶಿವಮೊಗ್ಗದ ಆರ್ಎಂಎಲ್ ನಗರದವರು. ಚಾಲಕ ನಿಂಗೇಶ್ (40), ಒಂದೇ ಕುಟುಂಬದ ಡಾಕಪ್ಪ (50), ದೀಪಾ (32), ಶ್ರೇಯಾ (16) ಮತಪಟ್ಟವರು.
ಕಾರು ಚಿಕ್ಕಮಗಳೂರಿನಿಂದ ಕಡೂರು ಕಡೆಗೆ ಸಾಗುತ್ತಿತ್ತು. ಬಸ್ ಬಾಣಾವರದಿಂದ ಚಿಕ್ಕಮಗಳೂರಿಗೆ ಬರುತ್ತಿತ್ತು.