‘ಜೆನಿಫರ್ ತುರ್ತು ನಿಗಾ ಘಟಕದಲ್ಲಿ ಇದ್ದಾಳೆ. ಹೊಟ್ಟೆಯ ಭಾಗ ಹೆಚ್ಚು ಸುಟ್ಟಿರುವುದರಿಂದ ಶಸ್ತ್ರ ಚಿಕಿತ್ಸೆ ಅನಿವಾರ್ಯ ಎಂದು ವೈದ್ಯರು ಹೇಳಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಚಿಕಿತ್ಸೆಗಾಗಿ ₹ 1 ಲಕ್ಷಕ್ಕಿಂತ ಹೆಚ್ಚು ಖರ್ಚಾಗುವ ಸಾಧ್ಯತೆ ಇದೆ. ಆದರೆ ನಮ್ಮ ಬಳಿ ಅಷ್ಟು ಹಣ ಇಲ್ಲ’ ಎಂದು ಜೆನಿಫರ್ ಸಂಬಂಧಿ ಶರವಣ ಅಳಲು ತೋಡಿಕೊಂಡರು.