ಮೆರವಣಿಗೆ: ಅಪಾರ ಬೆಂಬಲಿಗರೊಂದಿಗೆ ಇಲ್ಲಿಯ ವಿ.ಮ. ಪ್ರೌಢಶಾಲಾ ಆವರಣದಿಂದ ಪಟ್ಟಣ ಮುಖ್ಯ ರಸ್ತೆಯ ಮೂಲಕ ವಿ.ಮ.ವೃತ್ತ, ಬಸ್ ನಿಲ್ದಾಣ, ಅಮರಾವತಿ ಕ್ರಾಸ್ ಮಾರ್ಗವಾಗಿ ತಹಶೀಲ್ದಾರ್ ಕಚೇರಿ ತಲುಪಿದರು. ಹಸಿರು ಶಾಲು ಹೊತ್ತು ತಮ್ಮ ಬೆಂಬಲಿಗರ ಜೊತೆ ಹುನಗುಂದ ವಿಧಾನಸಭಾ ಚುನಾವಣಾಧಿಕಾರಿ ಎಸ್.ಬಿ. ಮುಳ್ಳಳ್ಳಿಯವರಿಗೆ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ ಪಾಟೀಲ, ಮಹಾಂತೇಶ ಅಂಗಡಿ, ವೀರೇಶ ಕೂಡ್ಲಗಿಮಠ, ವಿಜಯಕುಮಾರ ಪಾಟೀಲ ಇದ್ದರು.