ಚುನಾವಣೆ ಬಹಿಷ್ಕಾರ ಎಚ್ಚರಿಕೆ
ಗ್ರಾಮದಲ್ಲಿ ಈ ಮೊದಲು ಇದ್ದಂತೆ ಗ್ರಾಮ ಪಂಚಾಯಿತಿ ಕಚೇರಿಯನ್ನು ಸ್ಥಾಪಿಸದಿದ್ದರೆ ವಿಧಾನಸಭೆ ಚುನಾವಣೆಯ ಮತದಾನವನ್ನು ಬಹಿಷ್ಕರಿಸಲಾಗುವುದು. ಈ ಕುರಿತಂತೆ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಹುಚ್ಚಪ್ಪ, ವಿ.ನಾಗರಾಜ, ಕೆ.ಸುಮಲತಾ ಶಿವಪ್ಪ, ನಾಗರತ್ನಮ್ಮ ಕೊಟ್ರೇಶ್, ಮುಖಂಡರಾದ ಶಿವಕುಮಾರ್, ಅಲಬೂರು ಮಂಜುನಾಥ, ಕರಿಬಸಪ್ಪ, ಮಡಿವಾಳರ ಕೊಟ್ರೇಶ್, ಪಿ.ರುದ್ರಪ್ಪ, ಎಂ.ಜಿ.ಯಲ್ಲಪ್ಪ, ಕಡ್ಲಿ ಶಿವಪ್ಪ, ವಾಲೆಕಾರ ಪ್ರಕಾಶ, ಜಿ.ಗುರುವಪ್ಪ, ಶೇಖರಪ್ಪ, ಎಂ.ನಾಗರಾಜ ತಿಳಿಸಿದರು.