ಕಾರಟಗಿ: ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದು ಶಾಸಕ ಶಿವರಾಜ್ ತಂಗಡಗಿ ಹೇಳಿದರು.
ತಾಲ್ಲೂಕಿನ ಯರಡೋಣ ಗ್ರಾಮದಲ್ಲಿ ಗುರುವಾರ ನಡೆದ ಪ್ರಚಾರ ಕಾರ್ಯಕ್ರದಲ್ಲಿ ಅವರು ಮಾತನಾಡಿದರು.ವಿರೋಧ ಪಕ್ಷದವರು ನನ್ನ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಅವರಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ದೂರದೃಷ್ಟಿ ಇಲ್ಲ ಎಂದು ದೂರಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಕ್ಷೇತ್ರದ ಜನರು ನನಗೆ ಮತ್ತೊಮ್ಮೆ ಆಶೀರ್ವದಿಸಬೇಕು ಎಂದು ತಂಗಡಗಿ ಮನವಿ ಮಾಡಿದರು.
ಮುಖಂಡರಾದ ಶರಣೇಗೌಡ ಮಾಲೀಪಾಟೀಲ, ರುದ್ರಗೌಡ, ಕೆ.ಸಿದ್ದನಗೌಡ ಇದ್ದರು.
ವಾಗ್ವಾದ: ಶಿವರಾಜ್ ತಂಗಡಗಿ ತಮ್ಮ ಸಾಧನೆಗಳನ್ನು ವಿವರಿಸುವ ಸಮಯದಲ್ಲಿ ಅವರನ್ನು ವಿರೋಧಿಸಿ, ಸಭೆಯಲ್ಲಿದ್ದ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ತಂಗಡಗಿ ಬೆಂಬಲಿಗರು ಸಭೆಯಿಂದ ಅವರನ್ನು ಹೊರ ಕಳಿಸುವಲ್ಲಿ ಯಶಸ್ವಿಯಾದರು.