’ಪಕ್ಷದ ವರಿಷ್ಠರ ಮಟ್ಟದಲ್ಲಿ ತಪ್ಪು ಮಾಹಿತಿಯಿಂದ ತಮಗೆ ಟಿಕೆಟ್ ಕೈ ತಪ್ಪಿತ್ತು. ಅನಾರೋಗ್ಯದ ನೆಪ ಹೇಳಿ ಟಿಕೆಟ್ ನಿರಾಕರಿಸಲಾಗಿತ್ತು ಎಂಬ ಮಾಹಿತಿ ನಂತರ ತಿಳಿಯಿತು. ಆದರೆ ತಾವು ಆರೋಗ್ಯದಲ್ಲಿ ಸದೃಢವಾಗಿರುವುದನ್ನು ಮನವರಿಕೆ ಮಾಡಿದ ನಂತರ ವರಿಷ್ಠರು ತೀರ್ಮಾನ ಬದಲಿಸಿದರು’ ಎಂದು ಕಾರ್ಯಕರ್ತರಿಗೆ ತಿಳಿಸಿದರು. ಪಕ್ಷಕ್ಕಾಗಿ ದುಡಿಯದ ವ್ಯಕ್ತಿಗೆ ಟಿಕೆಟ್ ಘೋಷಣೆಯಾಗಿದ್ದು, ಮನಸ್ಸಿಗೆ ಬೇಸರ ಉಂಟು ಮಾಡಿತ್ತು. ಸುಮಾರು 40 ವರ್ಷದಿಂದ ಪಕ್ಷಕ್ಕೆ ನಿಷ್ಠೆಯಿಂದ ದುಡಿದು ಕ್ಷೇತ್ರಕ್ಕೆ ಅಪಾರ ಅಭಿವೃದ್ಧಿ ಕಾಮಗಾರಿಗಳನ್ನು ತಂದು ಕೆಲಸ ಮಾಡಿದ್ದರೂ ಹೀಗಾಯಿತಲ್ಲ ಎಂಬ ಬೇಸರವಿತ್ತು. ಆದರೆ ವರಿಷ್ಠರಿಗೆ ಇದೆಲ್ಲ ಮನವರಿಕೆಯಾದ ನಂತರ ಟಿಕೆಟ್ ಖಚಿತ ಪಡಿಸಿದರು ಎಂದರು.