ಉಡುಪಿ ಕ್ಷೇತ್ರದ ಟಿಕೆಟ್ ಬಗ್ಗೆ ಬಹಳಷ್ಟು ಗೊಂದಲ ನಿರ್ಮಾಣವಾಗಿತ್ತು. ಭಟ್ಟರಿಗೆ ಟಿಕೆಟ್ ಕೈತಪ್ಪಲಿದೆ ಎಂಬ ಸುದ್ದಿ ಬಲವಾಗಿತ್ತು. ಆದರೆ ಕ್ಷೇತ್ರದ ಶೇ99ರಷ್ಟು ಕಾರ್ಯಕರ್ತರು ಹಾಗೂ ಮುಖಂಡರ ಬೆಂಬಲ ಇದ್ದ ಕಾರಣ ಹಾಗೂ ಸಮೀಕ್ಷೆಯೂ ಅವರ ಪರವಾಗಿದ್ದ ಕಾರಣ ಮತ್ತೆ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಟಿಕೆಟ್ ತಪ್ಪಿಸಲು ಮುಖಂಡರ ಗುಂಪೊಂದು ಇನ್ನಿಲ್ಲದ ಪ್ರಯತ್ನ ಮಾಡಿದರೂ ಯಶಸ್ಸು ಸಿಕ್ಕಿಲ್ಲ. ಟಿಕೆಟ್ ಗಿಟ್ಟಿಸಿಯೇ ಸಿದ್ಧ ಎಂದು ಹೇಳಿದ್ದ ಭಟ್ಟರು ಯಶಸ್ಸು ಸಾಧಿಸಿದ್ದಾರೆ.