ರಾಜಕೀಯ ಅಜ್ಞಾನದಿಂದ ಹೊರಬಂದು ಅಭ್ಯರ್ಥಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಿನ್ನೆಲೆ ತಿಳಿದುಕೊಳ್ಳಬೇಕು. ಅಭ್ಯರ್ಥಿಯ ಪೂರ್ವಾಪರ ತಿಳಿಯದೆ ಯಾವುದೋ ಒತ್ತಡಗಳಿಗೆ ಮಣಿದು ಮತಗಟ್ಟೆಗಳ ಮುಂದೆ ನಿಂತಾಗ ಪಕ್ಷಗಳ ಅಬ್ಬರದ ಪ್ರಚಾರವಷ್ಟೇ ಮುಖ್ಯವಾಗಿ ಬಿಡುತ್ತದೆ. ಅಭ್ಯರ್ಥಿಯ ಅರ್ಹತೆ ಅಲ್ಲಿ ಗೌಣವಾಗುತ್ತದೆ. ನಮ್ಮ ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರವಾಗಬಲ್ಲ ಅಭ್ಯರ್ಥಿ ಯಾರೆಂಬುದನ್ನುನಿರ್ಧರಿಸಿಕೊಂಡು ಮತಗಟ್ಟೆಗೆ ತೆರಳಬೇಕು.