ನವದೆಹಲಿ: ದೆಹಲಿ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಸಿಂಗ್ ಸಾಚಾರ್ (94) ಶುಕ್ರವಾರ ನಿಧನರಾದರು.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿ ಅಧ್ಯಯನ ಮಾಡಿ, ವರದಿ ತಯಾರಿಸಲು 2005ರ ಮಾರ್ಚ್ನಲ್ಲಿ ‘ರಾಜೇಂದ್ರ ಸಾಚಾರ್ ಸಮಿತಿ’ ರಚಿಸಲಾಗಿತ್ತು.
ಮುಸ್ಲಿಮರಿಗೆ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಮತ್ತು ರಾಜಕೀಯ ಮೀಸಲಾತಿಯನ್ನು ಪ್ರತಿಪಾದಿಸುವ ‘ಸಾಚಾರ್ ಸಮಿತಿ ವರದಿ’ಯನ್ನು 2006ರಲ್ಲಿ ಸಂಸತ್ನಲ್ಲಿ ಮಂಡಿಸಲಾಗಿತ್ತು.