ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಕವಿತಾಗೆ ಕೊಲೆ ಬೆದರಿಕೆ; ದೂರು

Last Updated 21 ಏಪ್ರಿಲ್ 2018, 20:13 IST
ಅಕ್ಷರ ಗಾತ್ರ

ಬೆಂಗಳೂರು: ತೆಲುಗು ಚಿತ್ರರಂಗದಲ್ಲಿರುವ ಕ್ಯಾಸ್ಟಿಂಗ್‌ ಕೌಚ್ ಸಂಬಂಧ ನಟಿ ಶ್ರೀರೆಡ್ಡಿ ನಡೆಸಿದ್ದ ಅರೆನಗ್ನ ಪ್ರತಿಭಟನೆ ವಿರೋಧಿಸಿದ್ದ ನಟಿ ಕವಿತಾ ರಾಧೇಶ್ಯಾಮ್ ಅವರಿಗೆ ಅಪರಿಚಿತರು ಜೀವ ಬೆದರಿಕೆವೊಡ್ಡಿದ್ದಾರೆ.

ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿರುವ ಕವಿತಾ, ‘ಬೆದರಿಕೆವೊಡ್ಡಿದವರನ್ನು ಪತ್ತೆ ಹಚ್ಚಬೇಕು. ನನಗೆ ರಕ್ಷಣೆ ನೀಡಬೇಕು’ ಎಂದು ಕೋರಿದ್ದಾರೆ.

ಶ್ರೀರೆಡ್ಡಿ ವರ್ತನೆ ವಿರೋಧಿಸಿ ವಿಡಿಯೊ ಪೋಸ್ಟ್‌ ಮಾಡಿದ್ದೇನೆ. ಅದನ್ನು ಅಳಿಸುವಂತೆ ಅಪರಿಚಿತರು ಹೇಳುತ್ತಿದ್ದಾರೆ. ಕ್ಷಮೆ ಕೋರುವಂತೆ ಆನ್‌ಲೈನ್‌ ಹಾಗೂ ವಾಟ್ಸ್‌ಆ್ಯಪ್‌ ಮೂಲಕ ಬೆದರಿಕೆ ಕರೆ ಬರುತ್ತಿವೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸೈಬರ್ ಪೊಲೀಸರು, ‘ದೂರು ಸ್ವೀಕರಿಸಿದ್ದೇವೆ. ಕರೆಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT