ಮೂಡಿಗೆರೆ: ತಾಲ್ಲೂಕಿನ ಚಾರ್ಮಾಡಿ ಘಾಟಿಯಲ್ಲಿ ಬುಧವಾರ ಮಧ್ಯಾಹ್ನದ ಬಳಿಕ ವಾಹನ ದಟ್ಟಣೆ ಹೆಚ್ಚಳವಾಗಿ ವಾಹನ ಸವಾರರು ಪರದಾಡಿದರು.
ಬುಧವಾರ ಸರ್ಕಾರಿ ರಜೆ ಇದ್ದಿದ್ದರಿಂದ ಬೆಳಿಗ್ಗೆಯಿಂದಲೂ ಘಾಟಿಯಲ್ಲಿ ವಾಹನಗಳ ಓಡಾಟ ಹೆಚ್ಚಳವಾಗಿತ್ತು. ಬಕ್ರೀದ್ ಹಬ್ಬ ಆಚರಣೆಗೆ ಕರಾವಳಿಗೆ ತೆರಳಿದ್ದ ವಾಹನಗಳು ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದರಿಂದ ಮಧ್ಯಾಹ್ನದ ಬಳಿಕ ಘಾಟಿಯಲ್ಲಿ ವಾಹನ ದಟ್ಟಣೆ ಅತಿಯಾಯಿತು.
ಮೀನು ಸಾಗಣೆ, ಇಂಧನ ಸಾಗಣೆ ವಾಹನಗಳನ್ನು ಘಾಟಿಯ ಜಲಪಾತಗಳ ಬಳಿ ರಸ್ತೆ ಬದಿಯೇ ಸ್ವಚ್ಛಗೊಳಿಸಲು ನಿಲುಗಡೆಗೊಳಿಸಿದ್ದರಿಂದಲೂ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.