ನವದೆಹಲಿ: ಕಳೆದ ಮೂರು ತಿಂಗಳಿಂದ ಅನಾರೋಗ್ಯ ಕಾರಣ ರಜೆಯಲ್ಲಿದ್ದ ಅರುಣ್ ಜೇಟ್ಲಿ ಗುರುವಾರ ಮತ್ತೆ ಹಣಕಾಸು ಸಚಿವರಾಗಿ ಕಚೇರಿಗೆ ಮರಳಿದ್ದಾರೆ.
ಮೂತ್ರಪಿಂಡ ಸಮಸ್ಯೆಯಿದ ಬಳಲುತ್ತಿದ್ದ ಅರುಣ್ ಜೇಟ್ಲಿ ಮೇ 17ರಂದ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದರು. ವೈದ್ಯರ ಸಲಹೆಯಂತೆ ಮೂರು ತಿಂಗಳಿಂದ ವಿಶ್ರಾಂತಿ ಪಡೆಯುತ್ತಿದ್ದರು.
ಸಂಪೂರ್ಣ ಗುಣಮುಖರಾಗಿರುವ ಅರುಣ್ ಜೇಟ್ಲಿ ಇಲ್ಲಿನ ಸಂಸತ್ತಿನ ಉತ್ತರ ಬ್ಲಾಕ್ನಲ್ಲಿರುವ ಹಣಕಾಸು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಣಕಾಸು ಖಾತೆಯ ಜತೆ ಕಾರ್ಪೊರೇಟ್ ವ್ಯವಹಾರಗಳ ಖಾತೆಯನ್ನು ನೋಡಿಕೊಳ್ಳುತ್ತಿದ್ದಾರೆ.