‘ಕಾನೂನು ಸುಧಾರಣೆ; ಒಂದು ಚಿಂತನೆ’ ಚರ್ಚಾಗೋಷ್ಠಿ ಹಾಗೂ ಕಾನೂನು ವಿಶ್ವವಿದ್ಯಾಲಯದ ಪರೀಕ್ಷಾ ಸುಧಾರಣೆ, ಮೌಲ್ಯಮಾಪನದ ಗೊಂದಲ, ಪ್ರಾದೇಶಿಕ ಕಚೇರಿ ತೆರೆಯುವುದು, ಕನ್ನಡದಲ್ಲಿ ಪಠ್ಯಪುಸ್ತಕ ಲಭಿಸುವಂತಾಗಬೇಕು ಎಂಬ ಆಗ್ರಹ ಸೇರಿದಂತೆ ಹತ್ತು ಹಲವು ವಿಷಯಗಳನ್ನೊಳಗೊಂಡ ನಿರ್ಣಯಗಳನ್ನು ಈ ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.