ನವದೆಹಲಿ: ‘ವಿದೇಶಗಳಿಗೆ ಹೋದಾಗ ಅಲ್ಲಿ ರಾಷ್ಟ್ರದ ಆಂತರಿಕ ವಿಚಾರಗಳ ಬಗ್ಗೆ ಯಾವುದೇ ನಾಯಕರೂ ಕೂಡ ಚರ್ಚಿಸಬಾರದು’ ಎಂದು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಹೇಳಿದ್ದಾರೆ.
‘ಪ್ರಧಾನಿಯವರು ಈ ನಿಯಮವನ್ನು ಮೊದಲ ಬಾರಿಗೆ ಮುರಿದಿದ್ದಾರೆ. ಹಾಗಂತ ಬೇರೆಯವರು ಅವರನ್ನು ಅನುಸರಿಸಬೇಕಾಗಿಲ್ಲ’ ಎಂದು ಅವರು ಗುರುವಾರ ಟ್ವೀಟ್ ಮಾಡಿದ್ದಾರೆ.
ಜರ್ಮನಿಗೆ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಅಲ್ಲಿನ ಹ್ಯಾಮ್ಬರ್ಗ್ನ ಶಾಲೆಯೊಂದರಲ್ಲಿ ಬುಧವಾರ ಸಂವಾದ ನಡೆಸುವಾಗ ನೋಟು ರದ್ದತಿ ಸೇರಿದಂತೆ ಪ್ರಧಾನಿ ತೆಗೆದುಕೊಂಡ ಹಲವು ತೀರ್ಮಾನಗಳ ಬಗ್ಗೆ ಟೀಕಿಸಿದ್ದರು.
ಈ ಬೆಳವಣಿಗೆಯ ನಂತರ ಬಿಜೆಪಿ ಬಂಡಾಯ ಮುಖಂಡ ಸಿನ್ಹಾ, ಟ್ವಿಟರ್ನಲ್ಲಿ ಎಲ್ಲ ನಾಯಕರಿಗೂ ಹಿತವಚನ ಹೇಳಿದ್ದಾರೆ.