‘ಹಂಪಿ ಉತ್ಸವ ರೂವಾರಿ’ (ವಾ.ವಾ., ಆ. 23) ಪತ್ರದಲ್ಲಿ ‘ಹಂಪಿ ಉತ್ಸವದ ರೂವಾರಿ ದಿವಂಗತ ಎಂ.ಪಿ. ಪ್ರಕಾಶ್’ ಎಂದು ಹೇಳಿದ್ದಾರೆ. ಅದು ನಿಜ. ಸಾಂಸ್ಕೃತಿಕ ಕಳಕಳಿಯ ರಾಜಕಾರಣಿಯಾಗಿದ್ದ ಪ್ರಕಾಶ್ ಅವರ ಕಲಾಸೇವೆ ಅನನ್ಯ.
ಇದರೊಟ್ಟಿಗೆ ಅಂದು ಅಧಿಕಾರಿಯಾಗಿದ್ದ ವೈ.ಕೆ. ಮುದ್ದುಕೃಷ್ಣ ಅವರ ದೂರದರ್ಶಿತ್ವ, ಹಂಪಿ ಉತ್ಸವದ ಮೊದಲ ಸಂಯೋಜಕರಾಗಿ ದುಡಿದ ರಂಗನಿರ್ದೇಶಕ ಆರ್. ನಾಗೇಶ್ ಅವರೂ ಸಮಪಾಲನ್ನು ಪಡೆಯಬಲ್ಲ ಸಾಧಕರು ಎಂಬುದೂ ಗಮನಾರ್ಹ.