ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಶೇ 35 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದರಿಂದ ಈ ಮಕ್ಕಳು ತಮ್ಮ ಜೀವಮಾನವಿಡೀ, ಅನಾರೋಗ್ಯದಿಂದಲೇ ಬಳಲುತ್ತಾರೆ. ಅವರ ವೃತ್ತಿ ಜೀವನ ಮತ್ತು ಆರ್ಥಿಕ ಉತ್ಪಾದಕತೆ ಭವಿಷ್ಯದ ಮೇಲೂ ಅಡ್ಡ ಪರಿಣಾಮ ಬೀರಬಹುದು. ಅಪೌಷ್ಟಿಕತೆ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವುದೇ ಸ್ಪರ್ಧೆಯ ಮುಖ್ಯ ಉದ್ದೇಶ ಎಂದು ಮೋಹನ್ದಾಸ್ ಪೈ ತಿಳಿಸಿದರು.